ಅಲಿ ಸೂತ್ತರದಾಟಾ

ಅಲಿ ಸೂತ್ತರದಾಟಾ ಐಸುದದಿ
ಅಲಾವಿ ಬಲುದಾಟಾ                         ||ಪ||

ಕಲಿಯೊಳಗ ಹೆಚ್ಚಾದಿತು ಕರ್ಮವು
ಕೊಲಿಯುಕ್ಕಿ ಬರಬರಿತು ಭೂಮಿಗೆ
ದುಷ್ಕಾಳದ ಮಾಟ ಐಸುರದಿ
ಅಲಾವಿ ಬಲುದಾಟಾ                       ||ಅ.ಪ.||

ನೊಂದಿತು ಬಹುಮಂದಿ
ಗಂಜಿ ಕುಡಿ ಕುಡಿದು ಹೋದರು ಕುಂದಿ
ಮಂದಿ ಕೆಡಸಿ ಹನ್ನೊಂದು ಜಿಲ್ಹೆಯೊಳು
ಹೆಂಡರು ಮಕ್ಕಳು ಮಾರಿಕೊಂಡು ಒಳೆ
ದಂಡಿನ ಪಡಿಪಾಟಾ ಐಸುರದಿ
ಅಲಾವಿ ಬಲುದಾಟ                          ||೧||

ಮಲ್ಲಾಡ ಹಳವದೊಳಗೆ
ಕೂಳಿಲ್ಲದೆ ತಿಂದಾರೋ ಕೊಬ್ಬಟ್ಟ
ತಾಳಿ ಹರಿದು ಬಡಕೊಂಡು ಗಳಿಸಿದವ
ತಾಳಿಬಳ್ಳಿ ಪಡಿಜೋಳಕ ಸಾಲದೆ
ಕೂಳಿನ ಮೊಬ್ಬಾಟ ಐಸುರದಿ
ಅಲಾವಿ ಬಲುದಾಟ                       ||೨||

ಬಹಳ ತಿಳಿಯದರವು
ರಮಲ ರಟ ಕಾಲಜ್ಞಾನದ ಕುರುಹು
ಮೂಲ ತಿಳಿದು ಉಸುರಿದನು ರಿವಾಯತ
ಭೂಮಿಪ ಶಿಶುನಾಳಧೀಶನು ತಾನು
ಹೇಳಿದ ಘಟ್ಟಿಮುಟ್ಟಾ ಐಸುರದಿ
ಅಲಾವಿ ಬಲುದಾಟ                          ||೩||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೆ ಹೇಗೆ ಚಿಮ್ಮುತ್ತಿತ್ತು!!
Next post ದಲಿತರು ಸಾಬ್ರು ಹಿಂದುಳಿದೋರ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys